ಕವಿಸಮಯ

ಇದುವೇ ಮೌನ

– ಶಾರದಾ ಕಾರಂತ್

ಮಾತು ಹೊರಡದಾಗಿದೆ
ಮನವು ಭಾರವಾಗಿದೆ
ಇದುವೇ ಮೌನ||

ಬಡತನದ ಬೇಗೆಯಲಿ ಬೆಂದುಳಿದ ಅನ್ನವನು
ಅರೆಹೊಟ್ಟೆಯಲಿ ತುಂಬಿ ತೃಪ್ತನಾಗಿರುವುದು
ಇದುವೇ ಮೌನ?

ಅಸಹಾಯಕನಾಗಿ ಮುಂದೊಂದು ದಿನ

ಗೆಲುವು ಎಂಬ ಆಶಯದಿಂದ ನಿಲ್ಲದೇ ಸಾಗುವುದು
ಇದುವೇ ಮೌನ?

ಸದ್ವಿಚಾರವ ಹೊಂದಿ ಮನದ ಮಂಥನದಲ್ಲಿಟ್ಟು
ಅವಿವೇಕಿಗಳ ಒಡನೆ ವ್ಯರ್ಥ ಹಂಚಲು
ಬಯಸದಿರುವುದು
ಇದುವೇ ಮೌನ ?

ಕಾಣದಿರುವುದೆಲ್ಲವ ಕಂಡು ಅರಿಯುವಂತೆ ಅರಿತು
ಮನವ ಶೋಧಿಸಿ
ನಿರ್ಲಿಪ್ತನಂತೆ ಇರುವುದು
ಇದುವೇ ಮೌನ ?

ದಾರಿಯುದ್ದಕ್ಕೂ ಬಾಳಲಿ ಸೋಲು ಗೆಲುವುಗಳನ್ನುಂಡು
ಇದುವೇ ಜೀವನವೆಂದರಿತು
ಶಾಂತನಾಗಿರುವುದು
ಇದುವೇ ಮೌನ ?

ಏನಿದು ‘ಮೌ’ಖಿಕವಾಗಿ

‘ನ’ಗ್ನವಾಗಿರುವುದು ಮೌನ?

 

********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.