ಅರ್ಥಪೂರ್ಣ ಗಾಯನಕ್ಕೆ ಸಾಕ್ಷಿಯಾದರು ನಾಡಿನ ಹಿರಿಯ ಕವಿ ದೊಡ್ಡರಂಗೇಗೌಡ
ಬೆಂಗಳೂರು : ನಾಡಿನ ಜೀವನದಿ ಕಾವೇರಿಗಾಗಿ ತಮಿಳುನಾಡಿನೊಂದಿಗೆ ಅಗಾಗ ನಡೆಯುತ್ತಲೇ ಇರುವ ಗಲಭೆಗಳಿಗೆ ನಗರದ ಇಸ್ರೋ ಲೇಔಟಿನಲ್ಲಿರುವ ಆಲ್ಪೈನ್ ಪಬ್ಲಿಕ್ ಶಾಲೆಯ ಒಂದು, ಎರಡು ಹಾಗೂ ಮೂರನೆಯ ತರಗತಿಯ 160 ಮಕ್ಕಳು ಜೊತೆಗೂಡಿ ವಾದ್ಯ ಸಂಗೀತದ ಜೊತೆಗೆ ಏಕಕಂಠದಿಂದ ಹಾಡುವ ಮೂಲಕ ವಿಶಿಷ್ಟ ಉತ್ತರವನ್ನು ನೀಡಿ ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಿದರು.
ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಸಂಗೀತ-ಸಾಹಿತ್ಯ : ಚಿನ್ಮಯ ಎಂ.ರಾವ್
ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||
ಎಲ್ಲ ಜನರು ಕೂಡಿ ನಲಿವ ನಮ್ಮ ಚೆಲುವ ನಾಡಿದು |
ಏನೆ ಬರಲಿ ಒಂದುಗೂಡಿ ಮುನ್ನಡೆವ ನಾಡಿದು |
ಮುನ್ನಡೆವ ನಾಡಿದು |
ನಮ್ಮ ನಾಡ ಮಂತ್ರ ಅದುವೆ ಶಾಂತಿ ಮಂತ್ರ ನಮ್ಮದು |
ನಮ್ಮ ನಾಡ ಮಂತ್ರ ಅದುವೆ ಶಾಂತಿ ಮಂತ್ರ ನಮ್ಮದು |
ಶಾಂತಿ ಮಂತ್ರ ನಮ್ಮದು |
ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||
ಎಲ್ಲ ರಾಜ್ಯದಿಂದ ಬಂದ ಜನರು ನಮ್ಮ ನಾಡಲಿ |
ಸಂತಸದಿಂ ಬಾಳುತಿಹರು ಕನ್ನಡಾಂಬೆ ಮಡಿಲಲಿ |
ಕನ್ನಡಾಂಬೆ ಮಡಿಲಲಿ ||
ಎಲ್ಲ ಜಾತಿ ಎಲ್ಲ ಭಾಷೆ ಸರ್ವಜನರ ನಾಡಿದು |
ಒಂದೆ ರೀತಿ ಒಂದೆ ಪ್ರೀತಿ ನೀಡುವಂಥ ನಾಡಿದು |
ನೀಡುವಂಥ ನಾಡಿದು ||
ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||
ಒಡೆದು ಆಳೊ ಜನರನೆಲ್ಲ ದೂರ ಸರಿಸೊ ನಾಡಿದು |
ದೂರ ಸರಿಸೊ ನಾಡಿದು |
ಈ ಮಣ್ಣಿನಲ್ಲಿ ಪ್ರೇಮವೆಂಬ ಹೂವು ಎಂದು ಬಾಡದು |
ಹೂವು ಎಂದು ಬಾಡದು |
ಕಾವೇರಿ ನೀರಿಗಾಗಿ ಗಲಭೆ ಹುಟ್ಟಿಕೊಂಡರು |
ಕಾವೇರಿ ನೀರಿಗಾಗಿ ಗಲಭೆ ಹುಟ್ಟಿಕೊಂಡರು |
ಶಾಂತಿಪ್ರಿಯರು ನಮ್ಮ ಜನರು ತಾಳ್ಮೆಯನ್ನು ಮೆರೆದರು |
ಪ್ರೀತಿಯನ್ನು ತೆರೆದರು |
ಒಡೆದು ಆಳೊ ಜನರ ನಡುವೆ ಶಾಂತಿಪ್ರಿಯರು ಗೆದ್ದರು |
ಸನ್ನಿವೇಶ ಲಾಭ ಪಡೆವ ದುಷ್ಟರೆಲ್ಲ ಬಿದ್ದರು |
ದುಷ್ಟರೆಲ್ಲ ಬಿದ್ದರು |
ಎರಡು ನಾಡ ರೈತರ ಕಣ್ಣೀರು ಒಂದೆ ತಾನೆ ?
ಕಣ್ಣೀರು ಒಂದೆ ತಾನೆ ?
ಸಾವಧಾನದಿಂದ ಮುನ್ನಡೆಯಬೇಕು ತಾನೆ?
ಸಹನೆ ಮಾತ್ರದಿಂದ ಮುನ್ನಡೆಯಬೇಕು ತಾನೆ?
ನಡೆಯಬೇಕು ತಾನೆ ?
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…
[FAG id=4842]