ಕನ್ನಡಪರಿಸರಪ್ರವಾಸ

ಪರಿಸರ ಸಂರಕ್ಷಣೆಗೆ ದಶ ಸೂತ್ರಗಳು

– ಆರ್.ಬಿ.ಗುರುಬಸವರಾಜ.

ಇಂದು ವಿಜ್ಞಾನ ಪ್ರಪಂಚ ವಿಸ್ತಾರವಾಗುತ್ತಿದೆ. ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. 50 ವರ್ಷಗಳ ಹಿಂದೆ ಊಹಿಸಲು ಸಾಧ್ಯವಾಗದ ಪ್ರಗತಿ ವಿಜ್ಞಾನದಲ್ಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅನೇಕ ವಸ್ತುಗಳನ್ನು ನಮಗೆ ನೀಡಿದೆ. ಇವು ನಮ್ಮ ಬದುಕಿನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿವೆ. ಇವುಗಳಲ್ಲಿ ಕೆಲವು ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ನಾಗರೀಕ ಬದುಕಿಗೆ ಅನಿವಾರ್ಯವಾಗಿವೆ.
                ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ನೀಡಿರುವ ಅನೇಕ ವಸ್ತುಗಳು ನಮ್ಮ ಸುಖವನ್ನು ಹೆಚ್ಚಿಸಿವೆ. ಅಂತೆಯೇ ಕೆಲವು ವಸ್ತುಗಳು ಬದುಕನ್ನು ದುರ್ಬಲಗೊಳಿಸಿವೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೇವೆ. ಇದರ ಪರಿಣಾಮವಾಗಿ ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸಮಸ್ಯೆ ಹಾಗೂ ಸವಾಲಾಗಿದೆ.
                    ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದ್ದಾನೆ. ಮಾನವನ ದುರಾಸೆ, ಅಜಾಗರೂಕತೆಯಿಂದ ಆಗುತ್ತಿರುವ ದುರಂತಗಳಿಗೆ ಕೊನೆಯಿಲ್ಲದಾಗಿದೆ. ಈ ಪರಿಣಾಮಕಾರಿ ವಿನಾಶದಿಂದ ಜೀವ ಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದರಲ್ಲಿ  ಮಾನವನ ವಿನಾಶವೂ ಅಡಗಿದೆ. ಇದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಪರಿಸರ ಸಂರಕ್ಷಣೆಗೆ ಮುಂದಾಗುವುದು. ಆದ್ದರಿಂದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ವಿವೇಚನೆಯಿಂದ ಕೆಲವು ಸೂತ್ರಗಳನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾಗುತ್ತದೆ. ಅವು ಕೆಳಗಿನಂತಿವೆ.
1. ವಿದ್ಯುತ್ ಬಲ್ಬ್ ಬದಲಿಸೋಣ : ಇಂದು ರಾಷ್ಟ್ರವ್ಯಾಪಿ ಬಳಸುವ ವಿದ್ಯುತ್ ಬಲ್ಬ್‍ನ ಬಹುಭಾಗವನ್ನು ಸಾದಾರಣ ಇಂಡೋಸ್ಕೆಂಟ್ ಬಲ್ಬ್‍ಗಳು ಆಕ್ರಮಿಸಿಕೊಂಡಿವೆ. ಇವುಗಳಿಂದ ಹೆಚ್ಚು ವಿದ್ಯುತ್ ಶಕ್ತಿ ಬಳಕೆಯಾಗುತ್ತದೆ. ಅಲ್ಲದೇ ಕೋಣೆಯ ಉಷ್ಣತೆಯೂ ಹೆಚ್ಚುತ್ತದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ. ಈ ಬಲ್ಬ್‍ಗಳಿಗೆ ಬದಲಾಗಿ ಫ್ಲೋರೋಸ್ಕೆಂಟ್ ಬಲ್ಬ್‍ಗಳನ್ನು ಬಳಸುವುದರಿಂದ ಶೇ.75 ರಷ್ಟು ವಿದ್ಯುತ್ ಹಾಗೂ ಹಣ ಉಳಿತಾಯ ಮಾಡಬಹುದು. ( 1 ಸಾದಾರಣ ಇಂಡೊಸ್ಕೆಂಟ್ ಬಲ್ಬ್ 10 ಫ್ಲೋರೋಸ್ಕೆಂಟ್ ಬಲ್ಬ್‍ಗಳಷ್ಟು ವಿದ್ಯುತ್ ಬಳಸುತ್ತದೆ). ಅಲ್ಲದೇ ಫ್ಲೋರೋಸ್ಕೆಂಟ್ ಬಲ್ಬ್ ಕೋಣೆಯನ್ನು ತಂಪಾಗಿರಿಸುತ್ತದೆ. ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ ರಾತ್ರಿವೇಳೆ ಬೆಳಕಿಗಾಗಿ ಬಳಸುವ ವಿದ್ಯುತ್ತಿನ ಪ್ರಮಾಣ ಶೇ.35-40 ರಷ್ಟು. ಅಂದರೆ ಬಹುಪಾಲು ವಿದ್ಯುತ್ತನ್ನು ನಮ್ಮ ಬಲ್ಬ್‍ಗಳು ತಿಂದು ಹಾಕುತ್ತವೆ. ಅಈಐ/ಐಇಆ ಬಲ್ಬ್‍ಗಳ ಬಳಕೆಯಿಂದ ಈ ಪ್ರಮಾಣವನ್ನು ಶೇ.5 ಕ್ಕೆ ಇಳಿಸಬಹುದಾಗಿದೆ.
2. ಕಾಗದದ ಬಳಕೆ ಕಡಿಮೆ ಮಾಡೋಣ : ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಕಾಗದದ ತಯಾರಿಕೆಗಾಗಿ ಪ್ರತಿವರ್ಷ 10ಕೋಟಿ ಮರಗಳ ಮರಗಳ ಮಾರಣಹೋಮ ಆಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಗಳು ಪ್ರತಿವರ್ಷ ನಾಶವಾದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಮಾಹಿತಿ ತಂತ್ರಜ್ಞಾನ ಬಳಸಿ (Iಟಿಜಿoಡಿmಚಿಣioಟಿ ಖಿeಛಿhಟಿoಟogಥಿ) ಕಾಗದ ಪತ್ರಗಳ ಬಳಕೆ ಕಡಿಮೆ ಮಾಡಬಹುದಾಗಿದೆ. ಆನ್‍ಲೈನ್ ಬಳಸಿ ಬಹುತೇಕ ಪತ್ರಿಕೆಗಳನ್ನು ಓದಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ಕಾಗದ ಪತ್ರಗಳ ಬಳಕೆ ಕಡಿಮೆ ಮಾಡಿ ಮರಗಳನ್ನು ಸಂರಕ್ಷಿಸೋಣ.
3. ಸ್ವಿಚ್ ಆಫ್ ಮಾಡೋಣ : ಎಲೆಕ್ಟ್ರಾನಿಕ್ ಉಪಕರಣಗಾದಂತಹ ಟಿ.ವಿ, ಎ.ಸಿ, ರೆಫ್ರಿಜಿರೇಟರ್, ಕಂಪ್ಯೂಟರ್, ಫ್ಯಾನ್, ವಿದ್ಯುತ್ ಲೈಟ್ಸ್ ಮುಂತಾದವು ಬಳಕೆ ಇಲ್ಲದಾಗ ಸ್ವಿಚ್ ಆಫ್ ಮಾಡೋಣ. ಹೀಗೆ ಮಾಡುವುದರಿಂದ ಶೇ.10 ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ.
4. ಪ್ಲಾಸ್ಟಿಕ್‍ಗೆ ಟಾಟಾ ಹೇಳೋಣ : ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣನಾದ ರಾಕ್ಷಸನೆಂದರೆ ಪ್ಲಾಸ್ಟಿಕ್. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಕ್ಯಾಡ್ಮಿಯಂ, ಟೈಟಾನಿಯಂ ಡೈ ಆಕ್ಸೈಡ್, ಫಾಸ್ಪೇಟ್, ಥ್ಯಾಲೈಟ್, ಪಾಲಿಕ್ಲೋನಿನೇಟೆಡ್ ಬೈಫಿನೈಲ್, ಆರ್ತೋ ಟ್ರೈ ಕ್ರಿಸಾಯಿಕ್, ಎಥಲೀನ್, ಪಾಲಿವಿನೈಲ್ ಕ್ಲೋರೈಡ್, ಡಯಾಕ್ಸಿನ್ ಮತ್ತು ಸೀಸದಂತಹ ವಿಷಕಾರಕಗಳನ್ನು ಬಳಸುತ್ತಾರೆ. ನಾವು ಪ್ಲಾಸ್ಟಿಕನ್ನು ಬಳಸಿ ವಿವೇಚನೆ ಇಲ್ಲದೇ ಬಿಸಾಡುತ್ತೇವೆ. ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ ಕೊಳೆಯಲು ಸಾವಿರಾರು ವರ್ಷಗಳು ಬೇಕು. ಕೊಳೆಯುವ ಪ್ರಕ್ರಿಯೆಯಿಂದ ಮಣ್ಣು ಮಾಲಿನ್ಯವಾಗುತ್ತದೆ. ಹಲವು ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ. ಹಾನಿಕಾರಕ ಅನಿಲಗಳ ಸೇವನೆಯಿಂದ ಮಕ್ಕಳ ಮೂಳೆಗಳು ವಿರೂಪಗೊಳ್ಳುತ್ತವೆ, ನರಮಂಡಲಕ್ಕೆ ಧಕ್ಕೆ ಉಂಟಾಗುತ್ತದೆ, ಕಣ್ಣು ಮತ್ತು ಮೆದುಳಿಗೆ ಹಾನಿಯಾಗುತ್ತದೆ. ಆದ್ದರಿಂದ ಇವೆಲ್ಲವುಗಳಿಂದ ದೂರ ಇರಲು ಪ್ಲಾಸ್ಟಿಕ್‍ಗೆ ಟಾಟಾ ಹೇಳೋಣ. ಮಾರುಕಟ್ಟೆ ಅಥವಾ ಇತರೆ ಸಾಮಗ್ರಿ ಖರೀದಿಗಾಗಿ ಹೋದಾಗ ನಮ್ಮದೇ ವಆದ ಒಂದು ಚೀಲ ಜೊತೆಗಿರಲಿ. ಅಲ್ಲದೇ ಕಛೇರಿ ಮತ್ತು ಮನೆಗಳಲ್ಲಿ ಬಳಸಿ ಬಿಸಾಡುವ (ಜisಠಿosಚಿbಟe) ತಟ್ಟೆ/ಲೋಟಗಳ ಬದಲಾಗಿ ಶಾಶ್ವತ ತಟ್ಟೆ ಮತ್ತು ಲೋಟಗಳನ್ನು ಬಳಸುವ ರೂಢಿ ಬೆಳೆಸಿಕೊಳ್ಳೋಣ.
5. ತಣ್ಣೀರು ಬಳಸೋಣ : ನಾವು ಮನೆಯಲ್ಲಿ ಬಳಸುವ ಇಂಧನದ ಶೇ.20 ರಷ್ಟನ್ನು ನೀರು ಕಾಯಿಸಲು ಬಳಸುತ್ತೇವೆ. ಕೇವಲ ನೀರು ಕಾಯಿಸಲು ಇಷ್ಟೊಂದು ಪ್ರಮಾಣದ ಇಂಧನ ಬಳಸಿದರೆ ಭವಿಷ್ಯದಲ್ಲಿ ಇಂಧನದ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ತಣ್ಣೀರ ಸ್ನಾನ ಮಾಡಲು ಮನಸ್ಸು ಮಾಡೋಣ. ಇದರಿಂದ ಇಂಧನ ಉಳಿತಾಯದ ಜೊತೆಗೆ ಪರಿಸರ ಸಂರಕ್ಷಣೆ ಮಾಡಬಹುದು.
6. ವಿಲಾಸಿ ಜೀವನಕ್ಕೆ ಕಡಿವಾಣ ಹಾಕೋಣ : ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ವಿಲಾಸಿ ಜೀವನ ಹೆಚ್ಚು. ಎ.ಸಿ ಮತ್ತು ರೆಫ್ರಜರೇಟರ್‍ಗಳಿಂದ ವಾತಾವರಣಕ್ಕೆ ಮಾರಕವಾದ ಅhಟoಡಿo ಈಟoಡಿo ಅoಡಿboಟಿ(ಅಈಅ) ಬಿಡುಗಡೆಯಾಗುತ್ತದೆ. ಅಈಅ ಓಜೋನ್ ಪದರದ ಮೇಲೆ ದುಷ್ಪರಿಣಾಮ ಬೀರಿ ನೇರಳಾತೀತ ಕಿರಣಗಳು ಭೂಮಿಗೆ ಬೀಳಲು ಅನುವುಮಾಡಿಕೊಡುತ್ತದೆ. ಇದರಿಂದ ಹಾನಿಕಾರಕ ಚರ್ಮ ರೋಗಗಳು ಬಾಧಿಸುತ್ತವೆ. ಇವೆಲ್ಲವುಗಳಿಂದ ದೂರ ಇರಲು ವಿಲಾಸಿ ಜೀವನಕ್ಕೆ ಕಡಿವಾಣ ಹಾಕಿ ನಿಸರ್ಗಕ್ಕೆ ಪೂರಕವಾಗುವಂತಹ ಜೀವನ ನಡೆಸಲು ಹೊಂದಾಣಿಕೆ ಮಾಡಿಕೊಳ್ಳೋಣ.
7. ನೀರನ್ನು ಮಿತವಾಗಿ ಬಳಸೋಣ : ನೀರು ಅತ್ಯಮೂಲ್ಯ ಹಾಗೂ ಕೊರತೆಯಲ್ಲಿರುವ ಸಂಪನ್ಮೂಲ. ಇಂದು ಪ್ರಯೊಬ್ಬರೂ ನೀರು ಸಂರಕ್ಷಣೆಯತ್ತ ಚಿತ್ತ ಹರಿಸಬೇಕಾಗಿದೆ. ನೀರಿನ ಸಂರಕ್ಷಣಾ ತತ್ವಗಳನ್ನು ಪ್ರತಿ ಮನೆಯಲ್ಲೂ ಅನುಸರಿಸಬೇಕಾಗಿದೆ. ನೀರಿನ ಅನಗತ್ಯ ಬಳಕೆಯನ್ನು ತಪ್ಪಿಸಬೇಕು. ನೀರಿನ ಪುನರ್ಬಳಕೆ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರೂ ಜಲ ಸಾಕ್ಷರರಾಗಬೇಕು.
8. ಅನಗತ್ಯ ವಸ್ತುಗಳನ್ನು ದಾನ ಮಾಡೋಣ : ನಿಮಗೆ ಅನಗತ್ಯವಾದ ಆದರೆ ಇತರರು ಉಪಯೋಗಿಸಬಹುದಾದಂತಹ ಬಟ್ಟೆ, ಪಾತ್ರೆ, ಫರ್ನೀಚರ್ ಇತ್ಯಾದಿಗಳಿದ್ದರೆ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಅವಶ್ಯಕತೆ ಇದ್ದವರಿಗೆ ದಾನ ಮಾಡೋಣ. ಬೇರೆಯವರಿಗೆ ನೀಡಲು ಹಿಂಜರಿಕೆಯಾದರೆ ಅಂತಹವುಗಳನ್ನು ಸಂಗ್ರಹಿಸಲೆಂದೇ ಇರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾಹಿತಿ ಕೊಡಿ. ಅವರು ನಿಮ್ಮ ಮನೆ ಬಾಗಿಲಿಗೇ ಬಂದು ಸಂಗ್ರಹಿಸಿ ಅವಶ್ಯಕತೆ ಇದ್ದವರಿಗೆ ನೀಡುತ್ತಾರೆ. ಇದರಿಂದ ನಿಮ್ಮಲ್ಲಿ ಹಾಳು ಮತ್ತು ಕೊಳೆ ತೊಲಗುತ್ತದೆ ಹಾಗೂ ಇತರರಿಗೆ ಉಪಯೋಗವಾಗುತ್ತದೆ.
9. ಸಾರ್ವಜನಿಕ ಸಾರಿಗೆ ಬಳಸೋಣ : ಒಂದು ಸಮೀಕ್ಷೆ ಪ್ರಕಾರ ಶೇ.30 ರಷ್ಟು ಇಂಗಾಲದ ಡೈ ಆಕ್ಸೈಡ್ ಖಾಸಗೀ ವಾಹನಗಳಿಂದ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆ ಬಳಸುವುದು ಸೂಕ್ತ. ಸಾಧ್ಯವಾದ ಕಡೆಗಳಲ್ಲಿ ಕಾಲ್ನಡಿಗೆಯಿಂದಲೇ ಓಡಾಡೋಣ ಅಥವಾ ಬೈಸಿಕಲ್ ಬಳಸೋಣ. ಇದರಿಂದ ಡೀಸಲ್ ಮತ್ತು ಪೆಟ್ರೋಲ್‍ನ ಅನಗತ್ಯ ಬಳಕೆ ತಪ್ಪುತ್ತದೆ ಮತ್ತು ಶರೀರಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಪರಿಸರಕ್ಕೆ ಆಗುವ ಹಾನಿ ಕಡಿಮೆಯಾಗುತ್ತದೆ.
10. ಮರಗಳ ಮಾರಣ ಹೋಮ ನಿಲ್ಲಲಿ : ಇಂದು ಅಭಿವೃದ್ದಿ ಹೆಸರಿನಲ್ಲಿ ಪ್ರತಿವರ್ಷ ಶೇ.10-15 ರಷ್ಟು ಮರಗಳ ಮಾರಣಹೋಮ ನಡೆಯುತ್ತದೆ. ಇದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‍ನ ಪ್ರಮಾಣ ಅಧಿಕವಾಗುತ್ತದೆ ಹಾಗೂ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಸಾಧ್ಯವಾದಷ್ಟೂ ಪ್ರತಿ ಮನೆಯ ಹತ್ತಿರ 2 ಗಿಡಮರಗಳಿರಲಿ. ಮನೆಯ ಮುಂದೆ ಗಿಡಮರಗಳು ಕೇವಲ ಅಂದಕ್ಕಾಗಿ ಅಲ್ಲ. ಪರಿಸರವನ್ನು ಸ್ವಚ್ಛ ಹಾಗೂ ತಂಪಾಗಿರಿಸಲು ಅವು ಅವಶ್ಯಕ. ಮನೆಯಲ್ಲಿ ಉತ್ಪನ್ನವಾಗುವ ಇಂಗಾಲದ ಡೈ ಆಕ್ಸೈಡನ್ನು ಹೊಡೆದೋಡಿಸಿ ಶುದ್ದವಾದ ಆಮ್ಲಜನಕ ಪಡೆಯಲು ಸಹಕಾರಿ ಹಾಗೂ ಶುದ್ದ ಗಾಳಿ ¸ಸಂಚಾರಕ್ಕಾಗಿ ಯಾವುದೇ ಫ್ರೆಶ್‍ನರ್‍ಗಳ ಅವಶ್ಯಕತೆ ಇರುವುದಿಲ್ಲ.
`ಪರಿಸರ ಸಂರಕ್ಷಣೆ ಎಂಬ ಪದ ದಿನೇ ದಿನೇ ಅರ್ಥಹೀನವಾಗುತ್ತಿದೆ’ ಎಂಬ ಮಾತು ಕೇಳಿಬರುತ್ತಿವೆ. ಏಕೆಂದರೆ ಅದು ಕೇವಲ ವೇದಿಕೆ ಹಾಗೂ ಪುಸ್ತಕದ ಬದನೆಕಾಯಿ ಎನ್ನುವಂತಾಗಿದೆ. ಒಂದಂತೂ ನಿಜ, ಒಂದಲ್ಲ ಒಂದು ದಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ಈ ಬಗ್ಗೆ ಎಚ್ಚೆತ್ತುಕೊಳ್ಳಬಾಕಾದ ಪರಿಸ್ಥಿತಿ ಬಂದೊದಗುತ್ತದೆ. “ಕಾಲಾಯ ತಸ್ಮೈ ನಮಃ” ಎನ್ನುವಂತೆ ಕಾಲವೇ ಎಲ್ಲಕ್ಕೂ ಉತ್ತರಿಸಲಿದೆ ಎಂಬುದನ್ನು ನಾವೀಗಾಗಲೇ ಪ್ರಕೃತಿಯಲ್ಲಿ ನಡೆಯುತ್ತಿರುವ ವೈಪರೀತ್ಯಗಳಿಂದ ತಿಳಿಯಬಹುದಾಗಿದೆ. ಭವಿಷ್ಯ ಕರಾಳವಾಗಬಾರದು ಅಲ್ಲವೇ ? ಆದ್ದರಿಂದ ಈಗಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಕರ್ತವ್ಯವೂ ಆಗಿದೆ. ಇದನ್ನರಿತು ನಾವೆಲ್ಲರೂ ಬಾಳಬೇಕಾಗಿದೆ.
– ಆರ್.ಬಿ.ಗುರುಬಸವರಾಜ.
ಕೃಪೆ : http://rbguru.blogspot.in/2013/12/blog-post_2480.html

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.