ಕೊರೋನಾ ! ಕೊರೋನಾ ! ಕೊರೋನಾ !

ಎಲ್ಲಿ ನೋಡಿದರೂ ಕೊರೋನಾದೆ ಹಾವಳಿ. ಇಡೀ ಭೂಮಂಡಲವನ್ನು ಆವರಿಸಿದೆ. ಈ ಕೋರೊನಾ ತುಂಬಾ ಅಪಾಯಕಾರಿ, ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಾಗಲೇ ಜಗತ್ತಿನ ತುಂಬೆಲ್ಲಾ ತನ್ನ ತನವನ್ನು ಮೆರೆಯುತಿದೆ. ಇದಕ್ಕೆ ಭಾರತ ದೇಶವೂ ಕೂಡ ಹೊರತಾಗಿಲ್ಲ. ಶೀಯುತ ಮೋದಿಜಿಯವರು ಹಮ್ಮಿಕೊಂಡಿರುವ ಜಾಗೃತಿಯನು ನಾವೆಲ್ಲ ನಿಷ್ಠೆಯಿಂದ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ. ಅವರೆಲ್ಲ ಮಾಡುತ್ತಿರುವುದು ನಮಗಾಗಿ, ನಮ್ಮ ದೇಶದ ಜನತೆಗಾಗಿ.

ನಾವೆಲ್ಲ ಹೋರಾಡುತ್ತಾ ಇರುವುದು ಕಣ್ಣಿಗೆ ಕಾಣದ ವೈರಾಣುವಿನೊದಿಗೆ. ಅದಕ್ಕಾಗಿ ಎಲ್ಲರ ಸಹಾಯ ಸಹಕಾರ ಬೇಕಾಗಿದೆ. ಎಲ್ಲರೂ ಮನೆಯಲ್ಲಿಯೇ ಇರಬೇಕು. ಅಲ್ಲದೆ ಶುಚಿತ್ವ ಕಾಪಾಡಿಕೊಂಡು, ದೇಶಕ್ಕೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ಅಲ್ಲದೆ?
ಸಮಯವನ್ನು ಆದಷ್ಟು ಒಳ್ಳೆಯ ಕಾರ್ಯಗಳಿಂದ ಸದುಪಯೋಗ ಪಡಿಸಿಕೊಳ್ಳಬೇಕು. ನಮಗಾಗಿ ಶ್ರಮಿಸುತಿರುವ ಎಲ್ಲರಿಗೂ ಚಿರರುಣಿಯಾಗಿರಬೇಕು.

Tanmay V B
Alpine Public School Bangalore

Exit mobile version