ಕವಿಸಮಯ

‘ಅಂತ’ರಂಗಪರಿಕ್ರಮಣ

– ಶಾರದಾ ಕಾರಂತ್

ರಂಗದಲಿ ತನ್ನ ಭಾವವನ್ನರಿಯದೆ
ನಡೆಸಲು ಸಾಧ್ಯವೇ
ರಂಗಪರಿಕ್ರಮಣ||

ಕೆಲವೊಮ್ಮೆ ಸಾಗರದ ರಕ್ಕಸ ಅಲೆಗಳಂತೆ
ಕೆಲವೊಮ್ಮೆ ಶಿಖರದ ಉತ್ತುಂಗದಲ್ಲಿರುವಂತೆ||

ಮಳೆ ಸುರಿಸಿದ ಹಗುರಾದ ಮುಗಿಲಿನಂತೆ
ಗಾಂಭೀರ್ಯ ನಡೆಯ ಮೃಗರಾಜನಂತೆ||

ಮಮತೆಯ ವಾತ್ಸಲ್ಯಭರಿತವಾದ
ಅಕ್ಕರೆಯಂತೆ
ಭರತನ ಭ್ರಾತೃಪ್ರೇಮದ ಕುರುಹಿನಂತೆ||

ರಾಧಾಕೃಷ್ಣರ ಅತಿಶಯ ಪ್ರೇಮದಂತೆ
ರಾವಣನ ದರ್ಪದ ಅಧಿಪತ್ಯದಂತೆ||

ಈ ಎಲ್ಲಾ ಭಾವಗಳ ಅಂತರಂಗದಲಿ ಮೂಡಿಸುತ
ನಡೆಸುವನು ಮಾನವನು
ರಂಗಪರಿಕ್ರಮಣ||

ರಂಗುರಂಗಿನ ಬಾಳಿನ ವೇದಿಕೆಯಲಿ
ನಿಲ್ಲದು ಈತನ ಪರಿಭ್ರಮಣ||

ಒಳಗೇ ಅಡಗಿದೆ ವೇಷಭೂಷಣ
ಹೊರಗೆ ತೋರಿಸನು “ಅಂತ”ರಂಗ ಪಯಣ||

******

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.