ಹೆಸರು: ಡಾ. ಎಸ್.ಶ್ರೀಧರಮೂರ್ತಿ, ಸಮರ್ಥ
ತಂದೆ: ಎಸ್.ಶ್ರೀಕಂಠಯ್ಯ (ಸೊಸೈಟಿ ಶ್ರೀಕಂಠಯ್ಯ ನವರು)
ತಾಯಿ: ಶ್ರೀಮತಿ ವೆಂಕಟ ಲಕ್ಷ್ಮಮ್ಮ.
ವಿದ್ಯಾರ್ಹತೆ: ಡಾಕ್ಟರ್ ಆಫ್ ಆಲ್ಟರ್ ನೇಟಿವ್ ಮೆಡಿಸಿನ್, ಶ್ರೀಲಂಕಾ.
ಜನನ: ದೈವಾಧೀನ:
ಆರ್ಥಿಕವಾಗಿ ಯಾವ ಫಲಾಪೇಕ್ಷೆಯನ್ನೂ ನಿರೀಕ್ಷಿಸದೇ, ಜಾತಿ, ಭೇದ, ಅಂತಸ್ತುಗಳ, ತಮ್ಮ ಸಮಯದ, ಆಹಾರದ ಪರಿವೆಯಿಲ್ಲದೇ, ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ರೋಗನಿದಾನವನ್ನು ನೀಡುತ್ತಿದ್ದುದರಿಂದ ಬೇಗ ಮನಸ್ಸಿನ ನೆಮ್ಮದಿಯನ್ನು ಮರಳಿ ಪಡೆಯುತ್ತಿದ್ದ ಫಲಾನುಭವಿಗಳಲ್ಲಿ ಹುಬ್ಬಳ್ಳಿ, ಕಲ್ಬುರ್ಗಿ, ಕಾರವಾರ, ಪಾವಗಡ, ಚಳ್ಳಕೆರೆ, ಕರ್ನಾಟಕ ಅಷ್ಟೇ ಅಲ್ಲ ಭಾರತದ ಅನೇಕ ಕಡೆಗಳಿಂದ ಚಿತ್ರದುರ್ಗಕ್ಕೆ ಬಂದು ಹೋಗುತ್ತಿದ್ದವರಲ್ಲಿ ಅನೇಕ ಖ್ಯಾತಿವೆತ್ತ ಡಾಕ್ಟರ್ಗಳು, ಇಂಜಿನೀಯರ್ ಗಳು, ವಕೀಲರು, ಪತ್ರಕರ್ತರು, ಟಿ.ವಿ.ಛಾನಲ್ ನವರೂ, ಎಲ್ಲಕ್ಕಿಂತ ಹೆಚ್ಚಾಗಿ ಅಸಂಖ್ಯ ಜನ ಸಾಮಾನ್ಯರೂ ಇದ್ದಾರೆ.
ಜ್ಯೋತಿಷ್ಯ ವಿಜ್ಞಾನ, ವಾಸ್ತು, ಮುಂತಾದವುಗಳ ಸತ್ಯ ಹಾಗೂ ಒಳಗುಟ್ಟನ್ನು ನಿಸ್ವಾರ್ಥವಾಗಿ, ಕೆಲವೊಮ್ಮೆ ನಿಷ್ಠೂರ ಪ್ರಚಾರ ಮಾಡಲು ತಮ್ಮದೇ ಆದ ಪಠ್ಯ ಕ್ರಮಗಳನ್ನು ತಯಾರಿಸಿ, ದಾವಣಗೆರೆ, ಚಿತ್ರದುರ್ಗ ಪಟ್ಟಣಗಳಲ್ಲಿ ತರಗತಿಗಳನ್ನು ನಡೆಸಿ ಉಚಿತ ಶಿಕ್ಷಣ ತರಬೇತಿಯನ್ನು ನೀಡಿ ಅನೇಕ ಶಿಷ್ಯ ವೃಂದಗಳನ್ನು ಬೆಳೆಸಿರುತ್ತಾರೆ. ಪ್ರಕೃತಿ-ಪರಿಸರವನ್ನು ಉಳಿಸುವ ಉದ್ದೇಶದಿಂದ ಮುತ್ತುಗ, ದೇವದಾರು, ಔದುಂಬರ ಇತ್ಯಾದಿ ಔಷಧ ಸಸ್ಯಗಳ ಬೀಜಗಳನ್ನು ಅರಣ್ಯ ಇಲಾಖೆ, ಕೃಷಿ ಇಲಾಖೆಗಳಿಂದ ತರಿಸಿ ತಮ್ಮ ಮನೆಯಲ್ಲೇ ಅವುಗಳನ್ನು ಬೆಳೆಸಿ ಉಚಿತವಾಗಿ ಹಂಚುವ ಮರ ಬೆಳೆಸುವ ಹವ್ಯಾಸಿಗಳ ಗುಂಪನ್ನು ಸೃಷ್ಟಿಸಿದ್ದಾರೆ.
ಆಗಾಗ ಇಂಟರ್ನೆಟ್ ಸಂವಾದ, ಸಂಪರ್ಕಗಳ ಮೂಲಕ ಅಮೇರಿಕಾ, ಲಂಡನ್, ಶ್ರೀಲಂಕಾ, ಜರ್ಮನಿ ಮುಂತಾದ ವಿದೇಶಗಳ ಅನೇಕ ವಿದ್ವಾಂಸರೊಂದಿಗೆ ಸ್ನೇಹಸಂಪಾದಿಸಿದ್ದ ಇವರು ಆಗಾಗ ಕರ್ನಾಟಕದ ಪ್ರಮುಖ ಜ್ಯೋತಿಷ್ಯ ಶಾಸ್ತ್ರ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ಶ್ರೀಯುತ ಪಾವಗಡ ಪ್ರಕಾಶ್, ಶತಾವಧಾನಿ ಡಾ.ಆರ್.ಗಣೇಶ್, ರಾಮನ್ ಜ್ಯೋತಿಷ್ಯ ಶಾಸ್ತ್ರ ಸಂಸ್ಥೆ ಬೆಂಗಳೂರು ಇದರ ಮುಖ್ಯಸ್ಥರಾದ ಡಾ.ವಾಸನ, ಖ್ಯಾತ ಜ್ಯೋತಿಷಿ ಶ್ರಿ ಶಂಕರ್, ರಾಜಾಜಿ ನಗರ, ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಜ್ಯೋತಿಷಿಗಳಾಗಿದ್ದ ದಿ.ಹಿತ್ಲಹಳ್ಳಿ ನಾಗೇಂದ್ರ ಭಟ್ಟರು, ಹರಿಹರದ ಜನಮಾನ್ಯ ಜ್ಯೋತಿಷಿ ಶ್ರೀ ದತ್ತಂಭಟ್ಟರು, ಹುಬ್ಬಳ್ಳಿಯ ಡಾ.ಶ್ರೀ. ಮಾರಿಹಾಳರು, ಖ್ಯಾತ ಲೇಖಕರು ಮತ್ತು ಆಯುರ್ವೇದ ತಜ್ಞರು ಡಾ.ಗುಂಡೂರಾವ್, ಮಾರೇನ ಹಳ್ಳಿ ಬೆಂಗಳೂರು, ಮುಂತಾದವರ ಆತ್ಮೀಯರಾಗಿದ್ದ ಇವರು ಬೆಂಗಳೂರಿನ ಖ್ಯಾತಿವೆತ್ತ ಸಂಸ್ಥೆಗಳಾದ ಭಾರತೀಯ ವಿದ್ಯಾಭವನ, ಮಿಥಿಕ್ ಸೊಸೈಟಿ ಮುಂತಾದರು ಏರ್ಪಡಿಸಿದ್ದ ವಿದ್ವತ್ ಸಭೆಗಳಲ್ಲಿ ಆಹ್ವಾನಿತರಾಗಿಯೂ ಸನ್ಮಾನವನ್ನು ಸ್ವೀಕರಿಸಿರುತ್ತಾರೆ.
ಶ್ರಿ ಶ್ರೀಧರ ಸಮರ್ಥ ಇವರ ನಿರ್ಮಾ
ಸಹೃದಯರು ಈ ವಿಶಿಷ್ಟ ಧ್ವನಿ ಮುದ್ರಣವನ್ನು ಕೊಂಡು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಶ್ರಿ ನರಸಿಂಹ ಸರಸ್ವತಿ, ಶ್ರಿ ದತ್ತನ ಕೃಪೆಗೆ ಪಾತ್ರ ರಾಗ ಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ಸಂಪರ್ಕ ದೂ.ವಾ. 9900682197